2021-05-16 22:18:16
ಚಂಡುಮಾರುತ: ಕಾಪು ತಾಲ್ಲೂಕಿನಲ್ಲಿ ಅಪಾರ ಹಾನಿ ಕಾಪು : ರವಿವಾರ ಚಂಡಮಾರುತ ಅಬ್ಬರ ಕಡಿಮೆಯಾಗಿದ್ದು, ಶನಿವಾರ ಚಂಡಮಾರುತ ಹಾಗೂ ಮಳೆಯಿಂದ ತಾಲೂಕಿನ ವಿವಿಧೆಡೆ ಅಪಾರ ಹಾನಿಯಾಗಿದೆ. ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್ ನಲ್ಲಿ ಅಲೆಗಳ ಅಬ್ಬರದಿಂದ ತೀರದಲ್ಲಿ ನಿರ್ಮಿಸಿದ್ಧ ವಾಚ್ ಟವರ್, ಹಲವಾರು ಲೈಟ್ ಕಂಬಗಳಿಗೆ ಹಾನಿಯಾಗಿವೆ. ಬೀಚ್ನ ಹುಲ್ಲುಹಾಸಿನ ಮೇಲೆ ಅಲೆಯಬ್ಬರಕ್ಕೆ ಮರಳು ಬಿದ್ದು ಸೌಂದರ್ಯಕ್ಕೆ ಧಕ್ಕೆಯಾಗಿದೆ. ಚಂಡಮಾರುತ ಪ್ರಭಾವದಿಂದ ಸುಮಾರು 20 ಲಕ್ಷ ರೂಪಾಯಿಯಷ್ಟು ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ. ಶನಿವಾರ ಚಂಡಮಾರುತದಿಂದ ಪಡುಬಿದ್ರಿ, ಹೆಜಮಾಡಿ, ಬಡಾ ಉಚ್ಚಿಲ, ಎರ್ಮಾಳು, ಕಾಪು ಬೀಚ್ನಲ್ಲಿ ಕಡಲು ಉಕ್ಕೇರಿದ್ದು, ಸಮುದ್ರ ತೀರ ಸಂಪೂರ್ಣ ಸಮುದ್ರದಿಂದ ಆವೃತವಾಗಿತ್ತು. ಇದರಿಂದ ರಸ್ತೆಯನ್ನೂ ಕೊಚ್ಚಿಕೊಂಡು ಹೋಗಿತ್ತು. ರವಿವಾರ ಸಮುದ್ರದ ಅಲೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.
View full article
71 views19:18