2021-05-27 10:18:12
ನನಗೆ ಕಣ್ಣು ನೋವು ಇದ್ದಿದ್ದರಿಂದ ಕಾರಿಂದ ಕೆಳಗೆ ಇಳಿಯಲಿಲ್ಲ: ಶಾಸಕ ಸುರೇಶ್ ಸ್ಪಷ್ಟೀಕರಣಚಿಕ್ಕಮಗಳೂರು: ಅಪಘಾತವಾಗಿ ಅರೋಗ್ಯಾಧಿಕಾರಿ ರಸ್ತೆ ಪಕ್ಕ ಬಿದ್ದು ನರಳಾಡಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಡಿ.ಎಸ್ ಸುರೇಶ್ ಸ್ಪಷ್ಟೀಕರಣ ನೀಡಿದ್ದು, ನನಗೆ ಕಣ್ಣು ನೋವು ಇದ್ದಿದ್ದರಿಂದ ಕಾರಿಂದ ಕೆಳಗೆ ಇಳಿಯಲಿಲ್ಲ ಎಂದು ತಿಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ನಡೆದ ಅಪಘಾತವೊಂದರಲ್ಲಿ, ಲಕ್ಕವಳ್ಳಿ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ರಮೇಶ್, ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆ ಒದ್ದಾಡಿದ್ದರು. ಆದರೆ ಅಲ್ಲೇ ಇದ್ದ ತರೀಕೆರೆ ಶಾಸಕ ಸುರೇಶ್ ಅವರು ಕಾರಿನಿಂದ ಇಳಿಯಲೇ ಇಲ್ಲ. ಶಾಸಕರ ಗನ್ ಮ್ಯಾನ್ ಕಾರಿನಿಂದ ಇಳಿದು ಬಂದರೂ ಶಾಸಕರು ಮಾತ್ರ ಕಾರಿನಿಂದ ಇಳಿದು ಸಹಾಯ ಮಾಡುವ ಮನಸು ಮಾಡಲೇ ಇಲ್ಲ! ಇದಕ್ಕೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದ್ದರಿಂದ ಘಟನೆ ಕುರಿತು ಶಾಸಕ ಡಿ.ಎಸ್ ಸುರೇಶ್ ಸ್ಪಷ್ಟೀಕರಣ ನೀಡಿದ್ದಾರೆ.
View full article
51 views07:18