Get Mystery Box with random crypto!

ಭವಿಷ್ಯದಲ್ಲಿ ಭೂಮಿಗೆ ಕಾದಿದೆಯಾ ಆಪತ್ತು? ಕೊತ ಕೊತ ಕುದಿಯುತ್ತಿದ್ದಾನೆ ' | Kannada News Daily

ಭವಿಷ್ಯದಲ್ಲಿ ಭೂಮಿಗೆ ಕಾದಿದೆಯಾ ಆಪತ್ತು? ಕೊತ ಕೊತ ಕುದಿಯುತ್ತಿದ್ದಾನೆ 'ಸೂರ್ಯ'!

ಜನ ತಮ್ಮನ್ನು ತಾವು ಹೊಗಳಿಕೊಳ್ಳಲು 'ಸೂರ್ಯನಿಗೆ ಟಾರ್ಚಾ' ಅಂತಾ ಡೈಲಾಗ್ ಹೊಡೆಯುತ್ತಾರೆ. ಆದ್ರೆ ನಾಸಾ ಆ ಡೈಲಾಗ್‌ಗೂ ಸವಾಲು ಹಾಕುವಂತೆ ಸೂರ್ಯನ ಅಧ್ಯಯನಕ್ಕೆ ಉಪಗ್ರಹ ಉಡಾವಣೆ ಮಾಡಿತ್ತು. 2020ರಲ್ಲಿ 'ಸೋಲಾರ್ ಆರ್ಬಿರ್ ಪ್ರೋಬ್' ಉಪಗ್ರಹ ಬಾಹ್ಯಾಕಾಶಕ್ಕೆ ಹಾರಿ, ಸೂರ್ಯನ ತಲುಪಿತ್ತು. ಈ ಉಪಗ್ರಹ ಅದೆಷ್ಟು ಶಕ್ತಿಶಾಲಿ ಎಂದರೆ, ಸೂರ್ಯನ ಕೆಂಡದಂತಹ ಜ್ವಾಲೆಗಳನ್ನೂ ಸಹಿಸಿಕೊಳ್ಳುತ್ತದೆ. ಇದೀಗ 'ಸೋಲಾರ್ ಆರ್ಬಿರ್ ಪ್ರೋಬ್' ಉಪಗ್ರಹ ಸೂರ್ಯನ ಮೇಲೆ ಏಳುತ್ತಿರುವ ಭೀಕರ ಜ್ವಾಲೆಗಳ ಫೋಟೋ ಮತ್ತು ವಿಡಿಯೋ ರವಾನಿಸಿದೆ. ಸೂರ್ಯ ಭೂಮಿಗೆ ಬೆಳಕು ನೀಡುವ ದೈವ ಎನ್ನುತ್ತಾರೆ ಮಾನವರು. ಆದರೆ ಇದೇ ಸೂರ್ಯನ ಬೆಳಕು ಸ್ವಲ್ಪ ಹೆಚ್ಚಾದರೂ ನಾವೆಲ್ಲಾ ಸುಟ್ಟು ಬೂದಿಯಾಗಿ ಹೋಗುತ್ತೇವೆ. ಇದಕ್ಕೆ ಕಾರಣ ಸೂರ್ಯನ ಜ್ವಾಲೆಗಳು ಅಲಿಯಾಸ್ ಸೌರ ಜ್ವಾಲೆಗಳು.

View full article