2021-06-24 16:18:09
BIG BREAKING NEWS : ರಾಜ್ಯದಲ್ಲಿನ 'ಸಾರ್ವಜನಿಕ ಗ್ರಂಥಾಲಯ' ತೆರೆಯಲು 'ಸರ್ಕಾರ ಆದೇಶ' ಬೆಂಗಳೂರು : ಕೊರೋನಾ ತಡೆಯ ಮಾರ್ಗಸೂಚಿ ಕ್ರಮಗಳಾದಂತ ಮಾಸ್ಕ್ ಧರಿಸೋದು, ಸ್ವಚ್ಛತೆ ಕಾಪಾಡೋದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು, ರಾಜ್ಯದಲ್ಲಿನ ಸಾರ್ವಜನಿಕ ಗ್ರಂಥಾಲಯಗಳನ್ನು, ತಾತ್ಕಾಲಿಕವಾಗಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನಿರ್ದೇಶನದನ್ವಯ ತೆರೆಯುವಂತೆ ರಾಜ್ಯ ಸರ್ಕಾರ ಆದೇಶಿದೆ. KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್ : ರಾಜ್ಯದಿಂದ ಈ ಹೊರ ರಾಜ್ಯಗಳಿಗೂ ಸಾರಿಗೆ ಬಸ್ ಸಂಚಾರ ಆರಂಭ ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ (ಸಾಮಾನ್ಯ) ಸರ್ಕಾರದ ಅಧೀನ ಕಾರ್ಯದರ್ಶಿ ಭಾಗ್ಯ ಬಿಎನ್ ಅವರು ನಡವಳಿ ಹೊರಡಿಸಿದ್ದು, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ, ನಗರ, ತಾಲೂಕು, ಶಾಖಾ, ಸೇವಾ, ಸಮುದಾಯ ಮಕ್ಕಳ ಕೇಂದ್ರ ಗ್ರಂಥಾಲಯಗಳ ಸೇವೆಯನ್ನು ಕೋವಿಡ್-19 ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಲಾಗಿದ್ದು, ಈಗ ಸರ್ಕಾರ 30 ಜಿಲ್ಲೆಗಳ ಪೈಕಿ 17 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಲಾಗಿದ್ದು, ಉಳಿದ 13 ಜಿಲ್ಲೆಗಳಲ್ಲಿ ದಿನಾಂಕ 22-06-2021 ರಿಂದ 05-07-2021ರವರೆಗೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ.
View full article
39 views13:18