ಹೈದರಾಬಾದಿನಲ್ಲಿ ನಿರ್ಮಾಣವಾಗುತ್ತಿದೆ ರಾಮಾನುಜಾಚಾರ್ಯರ ‘ಸಮಾನತೆಯ ಪ್ರತಿ | 🎯 KPSC Materials 🎯
ಹೈದರಾಬಾದಿನಲ್ಲಿ ನಿರ್ಮಾಣವಾಗುತ್ತಿದೆ ರಾಮಾನುಜಾಚಾರ್ಯರ ‘ಸಮಾನತೆಯ ಪ್ರತಿಮೆ’ : ಫೆಬ್ರವರಿ 2022 ಕ್ಕೆ ಅನಾವರಣ
ಮುಂದಿನ ವರ್ಷದ ಫೆಬ್ರವರಿಯಲ್ಲಿ ಹೈದರಾಬಾದ್ನಲ್ಲಿ ‘ಸಮಾನತೆಯ ಪ್ರತಿಮೆ’ ಎಂದು ಹೆಸರಿಸಲಾದ ಶ್ರೀ ರಾಮಾನುಜಾಚಾರ್ಯರ ಪ್ರತಿಮೆ ಅನಾವರಣಗೊಳ್ಳಲಿದೆ.
ವೈಷ್ಣವ ಪಂಥದ ಮುಂದಾಳು ಮತ್ತು ಭಕ್ತಿ ಚಳುವಳಿಯ ರೂವಾರಿ ಶ್ರೀ ರಾಮಾನುಜಾಚಾರ್ಯರು1017 ರಲ್ಲಿ ತಮಿಳುನಾಡಿನ ಶ್ರೀ ಪೆರುಂಬದೂರಿನಲ್ಲಿ ಜನಿಸಿದರು. ಅವರು ವೇದಗಳ ಸಾರವನ್ನು ಒಂಬತ್ತು ಗ್ರಂಥಗಳ ರೂಪದಲ್ಲಿ ಪ್ರಸ್ತುತಪಡಿಸಿದರು.