ರಾಜಕೀಯದ ಜೊತೆ ಕೃಷಿ; ಇದು ಸಹೋದರರ ಯಶಸ್ಸಿನ ಕಥೆ! ವಿಜಯನಗರ, ಮೇ 24; ಇಲ್ಲೊಬ್ಬರು ಸಕ್ರಿಯ ರಾಜಕಾರಣದ ಜೊತೆ ಕೃಷಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿವಿಧ ಬೆಳ ಬೆಳೆದು, ಕುರಿ, ಕೋಳಿ ಸಾಕಾಣಿಕೆ, ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಇದು ಸಹೋದರರ ಯಶಸ್ಸಿನ ಕಥೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ತಾಂಡದ ನಿವಾಸಿ ಎಸ್. ಕೃಷ್ಣ ನಾಯ್ಕ್ ಅವರದ್ದು ಮೂವರು ತಮ್ಮಂದಿರು ಇರುವ ಅವಿಭಕ್ತ ಕುಟುಂಬ. ಕೃಷ್ಣ ನಾಯ್ಕ್ ತಂದೆ ಕೃಷಿಯನ್ನು ನೆಚ್ಚಿಕೊಂಡು ಜೀವನ ಸಾಗಿಸಿದವರು. ಇವರ ಮೂರು ಜನ ಮಕ್ಕಳಲ್ಲಿ ಕೃಷ್ಣ ನಾಯ್ಕ್ ದೊಡ್ಡವರು, ಮೂವರು ತಮ್ಮಂದಿರಲ್ಲಿ ಒಬ್ಬರು ಸರ್ಕಾರಿ ಉದ್ಯೋಗಿ. ಇನ್ನಿಬ್ಬರು ಅಣ್ಣನ ಜೊತೆ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
View full article