ರೈತರ ವಿಶೇಷ ಪ್ಯಾಕೇಜ್; ರಮೇಶ್ ಕುಮಾರ್ ಅಸಮಾಧಾನ ಕೋಲಾರ, ಮೇ 24; "ಸರ್ಕಾರ ಕನಿಷ್ಠ ಪಕ್ಷ ರೈತನನ್ನು ಕರೆಸಿ ಸೌಜನ್ಯಕ್ಕಾದರೂ ಕೇಳಬೇಕಿತ್ತು. ಹಾಗಾದರೆ ರೈತನಿಗೆ ಮರ್ಯಾದೆನೇ ಇಲ್ವಾ?. ನಾವೇನು ಭಿಕ್ಷುಕರಂತೆ ಕಾಣುತ್ತೀವಾ?" ಎಂದು ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಸರ್ಕಾರವನ್ನು ಪ್ರಶ್ನಿಸಿದರು. ಸೋಮವಾರ ಶ್ರೀನಿವಾಸಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ರೈತರ ವಿಚಾರದಲ್ಲಿ ಇಷ್ಟೊಂದು ಅಸಡ್ಡೆ ಏಕೆ ?. ಆರ್ಥಿಕ ಸಂಕಷ್ಟದಿಂದ ಕೊಡೋಕೆ ಆಗೋದಿಲ್ಲ ಎಂದು ಹೇಳಿ" ಎಂದು ಸರ್ಕಾರದ ಕೋವಿಡ್ ವಿಶೇಷ ಪ್ಯಾಕೇಜ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ವಿಶೇಷ ಪ್ಯಾಕೇಜ್ ಘೋಷಣೆ; ಯಡಿಯೂರಪ್ಪ ಪತ್ರಿಕಾಗೋಷ್ಠಿ ವಿವರ "ಹೆಕ್ಟೇರ್ಗೆ 10 ಸಾವಿರ ಪರಿಹಾರ ಕೊಟ್ಟಿರೋದು ಏನಕ್ಕೆ ಆಗುತ್ತದೆ.ಕೋವಿಡ್ ಕುರಿತ ಎಲ್ಲಾ ಲೇಟೆಸ್ಟ್ ಅಪ್ಡೇಟ್ಸ್ ಓದಿ
View full article