ನಟಿಸುವ ಆಸೆ ಸದ್ಯಕ್ಕಿಲ್ಲ, ಹ್ಯಾಪಿನೆಸ್ ಅಷ್ಟೇ ಮುಖ್ಯ: ರಾಜ್ ಬಿ ಶೆಟ್ಟಿ | Kannada News Daily
ನಟಿಸುವ ಆಸೆ ಸದ್ಯಕ್ಕಿಲ್ಲ, ಹ್ಯಾಪಿನೆಸ್ ಅಷ್ಟೇ ಮುಖ್ಯ: ರಾಜ್ ಬಿ ಶೆಟ್ಟಿ ಪ್ರಿಯಾ ಕೆರ್ವಾಶೆ ನಿಮ್ಮ ನಾಯಿ ಪ್ರೀತಿಗೂ ಚಾರ್ಲಿ 777 ಸಿನಿಮಾದ ಪಾತ್ರಕ್ಕೂ ಏನಾದ್ರೂ ಸಂಬಂಧ ಇದೆಯಾ? ಚಾರ್ಲಿ 777 ಸಿನಿಮಾದ ನಿರ್ದೇಶಕ ಕಿರಣ್ ರಾಜ್ ಒಂಥರಾ ಪಾರ್ಲೆಜಿ ಬಿಸ್ಕೆಟ್ನ ಬ್ರಾಂಡ್ ಅಂಬಾಸಿಡರ್ ಇದ್ದ ಹಾಗೆ. ಯಾವಾಗ್ಲೂ ಬೀದಿ ಬದಿ ನಾಯಿಗಳಿಗೆ ಬಿಸ್ಕೆಟ್ ಹಾಕೋದು ಅವರ ಕ್ರಮ. ನನಗೂ ಇಂಡಿಯನ್ ನಾಯಿಗಳನ್ನು ಕಂಡರೆ ಬಹಳ ಪ್ರೀತಿ ಅನ್ನೋದು ಅವರಿಗೆ ಗೊತ್ತು. ಆ ಪಾತ್ರಕ್ಕೆ ನನ್ನಂಥಾ ಪ್ರಾಣಿ ಪ್ರಿಯರೇ ಬೇಕಿದ್ದ ಕಾರಣ, ನನ್ನ ಮ್ಯಾನರಿಸಂ ಅದಕ್ಕೆ ಸರಿಹೊಂದುತ್ತಿದ್ದ ಕಾರಣ ಆ ಪಾತ್ರ ನನ್ನಿಂದ ಮಾಡಿಸಿದರು. ಏನು ಆ ಪಾತ್ರದ ವಿಶೇಷ? ಹಾಸ್ಯದ ಲೇಪ ಇರುವ ವೆಟರ್ನರಿ ಡಾಕ್ಟರ್ ಪಾತ್ರ. ಆದರೆ ಅವನು ಹಾಸ್ಯ ಪಾತ್ರ ಅಲ್ಲ. ಅವನ ಬಾಡಿ ಲ್ವಾಂಗೇಜ್ನಿಂದಾಗಿ, ಅವನ ಮಾತಿಂದಾಗಿ ಕಾಮಿಡಿ ಕ್ರಿಯೇಟ್ ಆಗುತ್ತೆ.- ನಿಮ್ಮ ಗರುಡ ಗಮನ ವೃಷಭ ವಾಹನ ಜೂನ್ನಲ್ಲಿ ರಿಲೀಸ್ ಅಂದಿದ್ರಿ.
View full article